ಮಂಗಳವಾರ, ಆಗಸ್ಟ್ 13, 2024

ಮೂವರು ಆತ್ಮಹತ್ಯೆಗೆ ಎಸ್ಪಿ ಮಿಥುನ್ ಕುಮಾರ್ ಹೇಳಿದ್ದೇನು?

ದರ್ಶನ್             ಭುವನೇಶ್ವರಿ                 ಮಾರುತಿ          


ಸುದ್ದಿಲೈವ್/ಶಿವಮೊಗ್ಗ


ಕ್ಲಾರ್ಕ್ ಪೇಟೆಯ ಮನೆಯೊಂದರಲ್ಲಿ ಮೂವರು ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮೂವರ ಆತ್ಮಹತ್ಯೆಯ ಕುರಿತು ವರದಿ ಬಂದ ಮೇಲೆ ಸಾವಿನ ಕುರಿತು ಮಾಹಿತಿ ತಿಳಿಯಲಿದೆ ಎಂದು ತಿಳಿಸಿದ್ದಾರೆ. 


ಇಂದು ಮನೆಯಲ್ಲಿ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.   ಮಹಿಳೆ ಒಬ್ಬರೇ ದುಡಿಯುತ್ತಿದ್ದ ಕಾರಣ  ಜೀವನ ಸಾಗಿಸುವುದು ಕಷ್ಟವಾದ ಹಿನ್ನಲೆಯಲ್ಲಿ ಊಟದಲ್ಲಿ ವಿಷ ಬೆರೆಸಿಕೊಂಡು ಸಾವನ್ನಪ್ಪಿರವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವುದಾಗಿ ತಿಳಿಸಿದ್ದಾರೆ. 


ಹೋಟೆಲ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಭುವನೇಶ್ವರಿ(25) ಕುಟುಂಬದ ಜವಬ್ದಾರಿ ಹೊತ್ತಿದ್ದರು. ಆದರೆ ಸಹೋದರ ಮಾರುತಿ ಮತ್ತು ಪುತ್ರ ದರ್ಶನ್(25) ಯಾವುದೇ ಕೆಲಸ ಮಾಡಿಕೊಂಡಿರಲಿಲ್ಲ. ಮಗ ದರ್ಶನ್ ಆಗಾಗ್ಗೆ ಕೆಲಸಕ್ಕೆ ಹೋಗಿ ಬರುತ್ತಿದ್ದ.  ಕ್ಲಾರ್ಕ್ ಪೇಟೆಯಲ್ಲಿ ಕೊಠಡಿಯಲ್ಲಿ ಮೂವರು ವಾಸವಾಗಿದ್ದರು. 


ಸಹೋದರ ಮಾರುತಿಗೆ (35) ಟಿಬಿ ಕಾಯಿಲೆಯಿಂದ ನರಳುತ್ತಿದ್ದನು. ಹಾಗಾಗಿ ಏನೂ ಕೆಲಸ ಮಾಡುತ್ತಿರಲಿಲ್ಲ. ಕೆಲಸಕ್ಕೆ ಹೋಗು ಎಂದಾಗಲಿಲ್ಲ ಆಗಾಗ ಅಕ್ಕ ಮತ್ತು ಸಹೋದರನ ನಡುವೆ ಜಗಳವಾಗುತ್ತಿತ್ತು. ಮಗನೂ ಸಹ ಪ್ರಯಕ್ಕೆ ಬಂದರೂ ಕೆಲಸಕ್ಕೆ ಆಗಾಗ ಹೋಗುತ್ತಿದ್ದ ಪರಿಣಾಮ ಇಬ್ಬರಿಗೆ ವಿಷ ಹಾಕಿ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ. 


ಬಡತನದ ಹಿನ್ನಲೆಯಲ್ಲಿ ಹಾಗೂ ಸಹೋದರ ಮತ್ತುಮಗನ ಸೋಮಾರಿ ತನಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ.  ಜೀವನ ನಡೆಸುವುದು ಕಷ್ಟ ವಾದ ಕಾರಣ ವಿಷ ಸೇವಿಸಿ ಆತ್ಮಹತ್ಯೆ ನಡೆದಿದೆ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ