ಮಂಗಳವಾರ, ಆಗಸ್ಟ್ 27, 2024

ತೀರ್ಥಹಳ್ಳಿಯ ಪಪಂನಲ್ಲಿ ಹೈಡ್ರಾಮಾ-ಧರಣಿ



ಸುದ್ದಿಲೈವ್/ಶಿವಮೊಗ್ಗ


ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿಯಲ್ಲಿ ಹೈಡ್ರಾಮಾ ನಡೆದಿದೆ. ಅಧ್ಯಕ್ಷ ಮತ್ತು ಉಪಧ್ಯಕ್ಷರ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಗೊಂದಲ ಮೂಡಿದೆ. ಕಾಂಗ್ರೆಸ್ ಸದಸ್ಯರಿಙದಲೇ ಧರಣಿ ನಡೆದಿದೆ. 


ಚುನಾವಣೆ ಅಧಿಕಾರಿಗಳ ನಿಲುವಿಗೆ ಆಕ್ಷೇಪಿಸಿ ಧರಣಿ ನಡೆದಿದೆ. ಪಟ್ಟಣಪಂಚಾಯಿತಿಯ ಸಭಾಂಗಣದಲ್ಲಿಯೇ ಧರಣಿ ನಡೆಸಲಾಗುತ್ತಿದೆ. ತಕ್ಷಣವೇ ಚುನಾವಣೆ ನಡೆಸುವಂತೆ ಧರಣಿ ನಡೆದಿದೆ. ಆದರೆ ಚುನಾವಣೆ 1 ಗಂಟೆಯ ನಂತರ ಚುನಾವಣೆ ನಡೆಸುವ ಅವಧಿ ನಿಗದಿಪಡಿಸಿದೆ.



ಮುಂದಿನ 2 ವರೆ ವರ್ಷಕ್ಕೆ ನಿಗದಿಯಾದ ಚುನಾವಣೆಯಾಗಿದೆ. ಚುನಾವಣೆಯನ್ನ  ಪ್ರಕ್ರಿಯಿಯೆನ್ನ ಕೆಲಸಮಯದ ವರೆಗೆ ತಹಶೀಲ್ದಾರ್ ಮುಂದೂಡಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಕೈತಪ್ಪುವ ಭೀತಿಯಲ್ಲಿ ಕಾಂಗ್ರೆಸ್ ಪಕ್ಷವಿದ್ದುದ್ದರಿಂದ ಈ ರೀತಿ ಪ್ರತಿಭಟನೆ ನಡೆದಿದೆ.   


ಒಟ್ಟು 15 ಸ್ಥಾನವಿರುವ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 6 ಸ್ಥಾನವಿದ್ದರೆ. ಕಾಂಗ್ರೆಸ್ 8 ಸ್ಥಾನದಲ್ಲಿದೆ.  ಒಬ್ಬ ಪಕ್ಷೇತರವಿದ್ದಾರೆ. ಆದರೆ ಬಿಜೆಪಿಯ ಸಂಸದ, ಶಾಸಕರು ಸೇರಿ 8 ಸ್ಥಾನ ಪಡೆಯಲಿದ್ದಾರೆ. ಒಂದು ವೇಳೆ ಬಿಜೆಪಿ ಪರಿಸ್ಥಿಯ ಲಾಭ ಪಡೆದುಕೊಂಡರೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಒಂದು ಸ್ಥಾನ ಹೆಚ್ಚು ಕಮ್ಮಿಯಾದರೂ ಕಾಂಗ್ರೆಸ್ ವಿಪಕ್ಷ ಸ್ಥಾನಕ್ಕೆ ಕೂರಲಿದೆ. 


ಶಾಸಕರು ಮತ್ತು ಸಂಸದರು ಇನ್ನೂ ಸ್ಥಳಕ್ಕೆ ಬಂದಿಲ್ಲ. ಇಬ್ಬರು ಬಾರದಿದ್ದರೆ. ಕಾಂಗ್ರೆಸ್ ಅಧಿಕಾರ ಹಿಡಿಯಲಿದ್ದಾರೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದರು. ಈ ಬಾರಿ ಕುತೂಹಲ ಕೆರಳಿಸಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ