ಸೋಮವಾರ, ಆಗಸ್ಟ್ 12, 2024

ಆನೆ ದಿನಾಚರಣೆಯ ಅಂಗವಾಗಿ ಸಕ್ರೇಬೈಲಿನಲ್ಲಿ ಆನೆಗೊಂದು ನಾಮಕಾರಣ-ಡಿಎಫ್ ಒರಿಂದ ಶಾಸ್ತ್ರೋಕ್ತವಾಗಿ ನಡೆದ ನೇಮಿಂಗ್ ಸೆರಮನಿ

 


ಸುದ್ದಿಲೈವ್/ಶಿವಮೊಗ್ಗ


ಸಕ್ಕರೆ ಬೈಲಿನಲ್ಲಿ ಆನೆ ದಿನಾಚರಣೆಯ ಅಂಗವಾಗಿ  ಅನೆಗೊಂದು ಹೆಸರಿಡಲಾಗಿದೆ.‌  ಮೂಡಿಗೆರೆಯ ಆಲ್ದೂರ್ ರೇಂಜ್ ನಲ್ಲಿ ಸೆರೆ ಸಿಕ್ಕ  ಕಾಡಾನೆಯನ್ನ  ಪಳಗಿಸಿ ಬಿಡಾರದಲ್ಲಿ ಶಾಸ್ತ್ರೋಕ್ತವಾಗಿ ಅಶ್ವತ್ಥಾಮ ಎಂದು  ಇಡಲಾಗಿದೆ. 


ಅರ್ಜುನ, ಸಾಗರ, ಕೃಷ್ಣ, ಬಹದ್ದೂರು, ಅಭಿಮನ್ಯ  5 ಆನೆಗಳನ್ನ ಸಾಲಾಗಿ ನಿಲ್ಲಿಸಿ ಮೂಡಿಗೆರೆಯಿಂದ ಬಂದ ಕಾಡಾನೆಗೆ ಅಶ್ವತ್ಥಾಮ ಎಂದು ನಾಮಕರಣ ಮಾಡಲಾಯಿತು. 6 ಆನೆಗಳಿಗೆ ಬಣ್ಣ ಬಳಿದು ದಸರಾ ಆನೆಗಳಂತೆ ಕಂಗೊಳಿಸುವಂತೆ ಮಾಡಲಾಗಿತ್ತು. ಪುರೋಹಿತ ಮಧು ಭಟ್ಟರ ಮಂತ್ರಘೋಷದ ನಡುವೆ  ಅರಣ್ಯ ವನ್ಯ ಜೀವಿ ಇಲಾಖೆಯ ಡಿಎಫ್ಒ ಪ್ರಸನ್ನ ಕೃಷ್ಣ ಪಟಗಾರ್ ಅವರು ಆನೆಯ ಕಿವಿಯಲ್ಲಿ ಮೂರು ಬಾರಿ ಹೇಳಿ ನಾಮಕರಣ ಮಾಡಾಯಿತು. 


ನಂತರ ಕುರಿತು ಮಾತನಾಡಿದ ಡಿಎಫ್ಒ ಪ್ರಸನ್ನ ಪಟಗಾರ್, ಆನೆದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಕಾನ್ಫೆರೆನ್ಸ್ ನಡೆಯುತ್ತಿದೆ. ಆನೆ ಮತ್ತು ಮಾನವ ಸಂಘರ್ಷದ ಕುರಿತು ಚರ್ಚೆ ನಡೆಯಲಿದ್ದು ಸಿಎಂ ಸಿದ್ದಾರಾಮಯ್ಯನವರ ನೇತೃತ್ವದಲ್ಲಿ ಕಾನ್ಫೆರೆನ್ಸ್ ನಡೆಯಲಿದೆ. 



2023 ನವೆಂಬರ್ 16 ರಂದು  ಕಾಡಾನೆಯನ್ನ ಸಕ್ಕರೆಬೈಲಿನ ಕ್ರಾಲ್ ಗೆ  ಕರೆತರಲಾಗಿತ್ತು. ಅದನ್ನ ಪಳಗಿಸಿ ನಾಮಕರಣ ಮಾಡಲೆಂದು ಇಂದು ಕ್ಯಾಂಪ್ ನಲ್ಲಿ ಕರೆತಲಾಗಿತ್ತು. ಪರಿಸರದ ಅಂಗವಾಗಿ ಆನೆದಿನಾಚರಣೆಯನ್ನ ಪ್ರತಿವರ್ಷ ಆಗಸ್ಟ್12 ರಂದು ಆನೆದಿನಾಚರಣೆಯನ್ನ ಆಚರಿಸಲಾಗಿದೆ. ಇವತ್ತಿಗೆ ಈ ದಿನಾಚರಣೆ ನಡೆದು 12 ವರ್ಷ ಕಳೆದು 13 ನೇ ವರ್ಷಕ್ಕೆ ಕಾಲಿಟ್ಟಿದೆ.‌ ಮೂರು ಮರಿ ಆನೆ ಸೇರಿ 23 ಆನೆಗಳು ಸಕ್ರೆಬೈಲಿನಲ್ಲಿದೆ ಎಂದು ಡಿಎಫ್ ಒ ತಿಳಿಸಿದ್ದಾರೆ. 


ಆನೆ ದಿಬಾಚರಣೆಯ ದಿನ ಶಾಲಾ ಮಕ್ಕಳ ಜಾಥ ನಡೆದಿದೆ.  ಸಕ್ರೆಬೈಲಿನ ಆನೆ ಬಿಡಾರದಿಂದ ಗಾಜನೂರಿನ ಶಾಲೆಯ ವರೆಗೆ ಜಾಥ ನಡೆದಿದೆ. ಶಾಲ ಮಕ್ಕಳಲ್ಲಿ ಆನೆ ದಿನಾಚರಣೆ ಜಾಗೃತಿಗಾಗಿ ಜಾಥ ನಡೆದಿದ್ದು ಡಿಎಫ್ಒ ಜಾಥಾಕ್ಕೆ ಹಸಿರು ನಿಶಾನೆ ನೀಡಿದ್ದಾರೆ.‌ 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ