ಮಂಗಳವಾರ, ಆಗಸ್ಟ್ 20, 2024

ಕೆಪಿಸಿಸಿ ಕಾರ್ಯದರ್ಶಿ ಹಾಗೂ ಉಪ್ಪಾರ ಸಮಾಜದ ಮುಖಂಡ ಕೆ ದೇವೇಂದ್ರಪ್ಪ ನವರ ನಿವಾಸದಲ್ಲಿ ನಾಳೆ ರಾಯರ ಆರಾಧನೆ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ ನಗರದ ಶರಾವತಿ ನಗರ 4ನೇ ಮುಖ್ಯರಸ್ತೆಯ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಉಪ್ಪಾರ ಸಮಾಜದ ಮುಖಂಡ  ಕೆ ದೇವೇಂದ್ರಪ್ಪನವರ ಮನೆಯಲ್ಲಿ   ಬುಧವಾರ ನಾಳೆ ಬುಧವಾರ ರಾಘವೇಂದ್ರ ಸ್ವಾಮಿಗಳ ಮಧ್ಯರಾಧನೆ (((ಪುಣ್ಯ ದಿನ  )) ಆಚರಿಸಲಾಗುತ್ತಿದೆ.  


ರಾಯಚೂರಿನ ಮಂತ್ರಾಲಯ ಹಾಗೂ ಕರ್ನಾಟಕ ರಾಜ್ಯದಲ್ಲಿಯೂ  ಈ ಕಾರ್ಯಕ್ರಮ ಸುಮಾರು ಏಳು ದಿನಗಳ ಕಾಲ  ಬಹಳ ವಿಜೃಂಭಣೆಯಿಂದ ರಾಯರ ಭಕ್ತಾದಿಗಳು  ಸದಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಇದು 353ನೇ ಅವರ ಆರಾಧನೋತ್ಸವ ಇದ್ದು. ಕೆಪಿಸಿಸಿ ಕಾರ್ಯದರ್ಶಿ ಹಾಗೂ ಉಪ್ಪಾರ ಸಮಾಜದ ಮುಖಂಡ ಕೆ ದೇವೇಂದ್ರಪ್ಪ ನವರ ನಿವಾಸದಲ್ಲಿ ನಾಳೆ ಆಚರಿಸಲಾಗುತ್ತಿದೆ. 


ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕಳೆದ ಆರು ವರ್ಷಗಳಿಂದ ತಮ್ಮ ಮನೆಯಲ್ಲಿ ಶ್ರೀ ರಾಯರನ್ನು ಶ್ರದ್ಧಾ ಭಕ್ತಿಯಿಂದ  ಅಭಿಷೇಕದೊಂದಿಗೆ ವಿಶೇಷ ಅಲಂಕಾರ ಮಾಡಿ  ರಾಯರಿಗೆ ಪೂಜಿಸಲಾಗುತ್ತಿದೆ. ನಂತರ ಬರುವ ಎಲ್ಲಾ ಭಕ್ತಾದರಿಗೆ ಮಂತ್ರಾಲಯದಿಂದ ಪರಿಮಳ ಪ್ರಸಾದ ವಿತರಿಸಿ ಭೋಜನದೊಂದಿಗೆ ಸತ್ಕರಿಸಲಾಗುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ರಾಯರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಅವರು ಮಾಡಿಕೊಂಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ