ಸೋಮವಾರ, ಆಗಸ್ಟ್ 12, 2024

ಕೊಟ್ಟಹಣ ವಾಪಸ್ ಕೇಳಿದಕ್ಕೆ ಮಹಿಳೆಗೆ ಆಸಿಡ್ ಎರಚುವುದಾಗಿ ಬೆದರಿಕೆ

 


ಸುದ್ದಿಲೈವ್/ಶಿವಮೊಗ್ಗ


ಕೊಟ್ಟ ಹಣ ವಾಪಾಸ್ ಕೇಳಿದಕ್ಕೆ ಆಸಿಡ್ ಎರಚುವುದಾಗಿ ಹೇಳಿ ಮಹಿಳೆಯನ್ನ ಇನ್ನಿಲ್ಲದಂತೆ ಕಾಡಿದ ಘಟನೆ ಈಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ. 


ರಿಯಲ್ ಎಸ್ಟೇಟ್ ದಂಧೆ ಮಾಡಿಕೊಂಡಿದ್ದ ಸಂತೆಕಡೂರಿನ ಲಿಂಗರಾಜು ಕಷ್ಟವಿದೆ ಕೈಗಡ ಸಾಲಬೇಕು ಎಂದು ನಂಬಿಸಿ 2021 ರಲ್ಲಿ  ಭಾರತೀಪುರದ ನಿವಾಸಿಯ ಮಹಿಳೆಯಿಂದ 3 ಲಕ್ಷ ರೂ. ಸಾಲ ಪಡೆದಿದ್ದ. ಮತ್ತೆ ಮಹಿಳೆಯನ್ನ ನಂಬಿಸಿ ಇನ್ನೂ ಹಣ ಬೇಕು ಎಂದು ಬೇಡಿಕೆ ಇಟ್ಟಿದ್ದ. 


ಹಣವಿಲ್ಲ ಕೊಟ್ಟ ಹಣ ವಾಪಾಸ್ ಕೊಡು ಎಂದು ಮಹಿಳೆ  ಬೇಡಿಕೊಂಡರೂ 3 ತೊಲ ಬಂಗಾರದ ಹಣವನ್ನ ಅಡವಿಟ್ಟಿಸಿ ಸಾಲ ಪಡೆದಿದ್ದ. ಕೊಟ್ಟ ಸಾಲ ವಾಪಾಸ್ ಕೊಡಪ್ಪ ಎಂದು ಕೇಳಿದ್ದಕ್ಕೆ ಮಹಿಳೆಗೆ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. 


ಇತ್ತೀಚೆಗೆ ಅಂದರೆ ಆ.5 ರಂದು ರಾತ್ರಿ ಚಿನ್ನಾಭರಣವನ್ನ ಕೊಡಲು ಮನೆಗೆ ಬರುತ್ತಿರುವುದಾಗಿ ಹೇಳಿದ ಲಿಂಗರಾಜು ಮನೆಯೊಳಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ. ಹಣ ಬೇಕು ಎಂದು ಕರೆ ಮಾಡುದ್ರೆ ಆಸಿಡ್ ಹಾಕಿ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. 


ಮಹಿಳೆ ಹೋದಕಡೆಯಲ್ಲೆಲ್ಲಾ ಫಾಲೋ ಮಾಡಿಕೊಂಡು ಹೋಗುವುದು ಮಾಡಿದ್ದಾನೆ.  ಆತನಿಂದ ಜೀವ ಬೆದರಿಕೆಯಿದೆ ನನಗೆ ಲಿಂಗರಾಜು ವಿನಿಂದ ರಕ್ಷಣೆ ಬೇಕೆಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ