ಭಾನುವಾರ, ಜುಲೈ 21, 2024

ನೀರಿನಲ್ಲಿ ಈಜಿ ವಿದ್ಯುತ್ ಸಂಪರ್ಕ ಸರಿಪಡಿಸಿದ ಪವರ್ ಮ್ಯಾನ್

ಸುದ್ದಿಲೈವ್/ತೀರ್ಥಹಳ್ಳಿ


ಮಲೆನಾಡಿನಲ್ಲಿ ನಿರಂತರ ಸುರಿಯುತ್ತಿರವ ಮಳೆ ಹಿನ್ನೆಲೆಯಲ್ಲಿ ಹಳ್ಳದಿಣ್ಣೆಗಳು ತುಂಬಿ ತುಳುಕುತ್ತಿವೆ. ಅದರಂತೆ ವಿದ್ಯುತ್ ತಂತಿ ಸರಿಪಡಿಸಲು ಪವರ್ ಮ್ಯಾನ್ ವೊಬ್ಬ ಸಾಹಸ ಮೆರೆದಿದ್ದಾನೆ.



ವಿದ್ಯುತ್ ಸಂಪರ್ಕ ಕಲ್ಪಿಸಲು ಪವರ್ ಮ್ಯಾನ್ ವೊಬ್ಬ ರಭಸವಾಗಿ ಹರಿಯುತ್ತಿರವ ಹಳ್ಳದಲ್ಲಿ ಈಜಿ ವಿದ್ಯುತ್ ಲೈನ್ ಸರಿಪಡಿಸಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಅರೇಹಳ್ಳಿ ಗ್ರಾ. ಪಂ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ನೀರಿನ ಮಧ್ಯೆ ಇದ್ದ ವಿದ್ಯುತ್ ತಂತಿ ತುಂಡಾದ ಹಿನ್ನೆಲೆಯಲ್ಲಿ ಕೆಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ವ್ಯತ್ಯಗೊಂಡಿದೆ. ನೀರಿಗೆ ಇಳಿದ ಸಿಬ್ಬಂದಿ ವಿದ್ಯುತ್ ಸಂಪರ್ಕ ಸರಿಪಡಿಸಿದ್ದಾನೆ. 

ನೀರಿನಲ್ಲಿ ಈಜಿ ತೆರಳುತ್ತಿರುವ ಪವರ್ ಮ್ಯಾನ್ ಸಂತೋಷ್


ನೀರಿಗೆ ಜಿಗಿದು ಸಂಪರ್ಕ ಸರಿಪಡಿಸಿದ ಪವರ್ ಮ್ಯಾನ್ ನನ್ನ ಸಂತೋಷ್ ಎಂದು ತಿಳಿದುಬಂದಿದೆ. ಕಲಬುರ್ಗಿ ಮೂಲಕ ಸಂತೋಷ್ ಮಲೆನಾಡಿನ ಜಲಾವೃತ ಪ್ರದೇಶದಲ್ಲಿರುವ ವಿದ್ಯುತ್ ಕಂಬಕ್ಕೆ ತೆರಳಲು ಸಾಹಸ ಪಟ್ಟಿದ್ದಾನೆ. ಆಗುಂಬೆ ಭಾಗಕ್ಕೆ ಕಮ್ಮರಡಿಯ ಸಬ್ ಡಿವಿಜನಿಂದ ಈ ವಿದ್ಯುತ್ ಸಂಪರ್ಕ ಕಲ್ಪಿಸ ಲಾಗಿದೆ. 


ಈತ ನೀರಿನಲ್ಲಿ ಈಜು ಹೊಡೆದುಕೊಂಡು ಹೋಗಿದ್ದು ತಪ್ಪು ಎನಿಸಿರಬಹುದು. ಆದರೆ ಮಲೆನಾಡಿನಲ್ಲಿ ಸುರಿದ ಮಳೆ ಅವಾಂತರವನ್ನ ಸೃಷ್ಠಿಸಿದೆ. ನೀರಿನಲ್ಲಿ ಇಳಿಯುವಾಗ ಸುರಕ್ಷತೆ ಇಲ್ಲದಿರುವುದು ತಪ್ಪಾಗಿದೆ.ಈ ಸಂಪರ್ಕವು ಸರಿ ಮಾಡಿದೆ ಇದ್ದರೆ ಮೂರು ಪಂಚಾಯಿತಿ ವಿದ್ಯುತ್ ಸಂಪರ್ಕ ಇಲ್ಲದಂತಾಗುತ್ತಿತ್ತು. ಇದನ್ನ ಮನಗಂಡು ನೀರಿಗೆ ಧುಮಕಿದ ಸಂತೋಷ್  ದುರಸ್ತಿ ಕೆಲಸ ನಡೆಸಿದ್ದಾನೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ