ಶುಕ್ರವಾರ, ಜುಲೈ 26, 2024

ಬಿಸಿಎಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳ ದಿಡೀರ್ ಪ್ರತಿಭಟನೆ-ವಾರ್ಡನ್ ಗೆ ಘೇರಾವ್-ಕುತೂಹಲ ಮೂಡಿಸಿದ ವಾರ್ಡ್ ನ್ ಹೇಳಿಕೆ-

 


ಸುದ್ದಿಲೈವ್/ಶಿವಮೊಗ್ಗ


ನಗರದ ಪಾಜಪೇಯಿ ಬಡಾವಣೆಯಲ್ಲಿರುವ‌ ಬಿಸಿಎಂ ಮೆಟ್ರಕ್ ನಂತರದ ಹಾಸ್ಟೆಲ್ ನಲ್ಲಿ ಮಳೆಯನ್ನೇ ಲೆಕ್ಕಿಸದೆ ವಿದ್ಯಾರ್ಥಿಗಳು ದಿಡೀರ್ ಪ್ರತಿಭಟನೆ ನಡೆಸಿದ್ದಾರೆ. ತಡವಾಗಿ ಬಂದ ವಾರ್ಡನ್ ಚಂದ್ರಶೇಖರ್ ಅವರನ್ನ ವಿದ್ಯಾರ್ಥಿಗಳು ಘೇರಾವ್ ಮಾಡಿದ್ದಾರೆ. 


ಅಧಿಕಾರಿಗಳಿಗೆ ದಿಕ್ಕಾರ, ಬೇಕೇ ಬೇಕು  ನ್ಯಾಯಬೇಕು ಎಂಬ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಸುಧೀರ್ಘ ಪ್ರತಿಔಟನೆ ನಡೆದರೂ ಮೇಲಾಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪ


ಊಟ, ವಿದ್ಯುತ್ ಮತ್ತು ನೀರಿನ ಬಗ್ಗೆ ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ. ಹಾಸ್ಟೆಲ್ ನಲ್ಲಿ ಪೌಷ್ಠಿಕ ಆಹಾರ ಸಿಗುತ್ತಿಲ್ಲ. ಸೋಲಾರ್ ಹಾಳಾಗಿದ್ದರೂ ದುರಸ್ತಿ ಮಾಡಿಸುತ್ತಿಲ್ಲ. ಕಳೆದ ಎರಡು ವರ್ಷದಿಂದ ಸೋಲಾರ್ ಕೆಟ್ಟಿದ್ದರು ರಿಪೇರಿ ಮಾಡುತ್ತಿಲ್ಲ.  ಮೇಲಧಿಕಾರಿಗಳ ಗಮನಕ್ಕೆ  ತರಲಾಗಿದ್ದರೂ ನಿರ್ಲಕ್ಷಿಸಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. 


ಬಡಾವಣೆಯಲ್ಲಿ ನಾಲ್ಕು ಹಾಸ್ಟೆಲ್ ಗಳಿವೆ. ಎರಡು ಬಿಸಿಎಂ, ಒಂದು ಎಸ್ ಸಿ ಮತ್ತು  ಎಸ್ ಟಿ ಹಾಸ್ಟೆಲ್ ಗಳಿವೆ. ಎಸ್ ಸಿಎಸ್ಟಿ ಹಾಸ್ಟೆಲ್ ಗೆ ಸ್ಟಡಿ ಟೇಬಲ್ ಬೆಡ್ ನ್ನ ನೀಡಾಗಿದೆ. ಬಿಸಿಎಂ ಹಾಸ್ಟೆಲ್ ಗೆ ಬರುತ್ತಿಲ್ಲ ಏಕೆ? ಬೇಸಿದ ಅನ್ನ ನೀಡುವುದಿಲ್ಲ. ಸಾಂಬಾರ್ ಬಾಯಿಗೆ ಹಾಕಲು ಸಾಧ್ಯವಿಲ್ಲ.  ಟೀಗಳನ್ನ ಕುಡಿಯುವ ಸ್ಥಿತಿಯಲ್ಲೇ ಇರಲ್ಲವೆಂದು ವಿದ್ಯಾರ್ಥಿಗಳ ಆರೋಪವಾಗಿದೆ. 



ಬೆಳಿಗ್ಗೆ ಟಿಫನ್ ಇನ್ ಟೈಮ್ಗೆ ಬರುತ್ತಿಲ್ಲ. ವಾರಕ್ಕೊಮ್ಮೆ ನೀಡುವ ಚಿಕನ್ ಸಹ ಗುಣಮಟ್ಟದಲ್ಲಿರಲ್ಲ. ಇದನ್ನ ಮೇಲಾಧಿಕಾರಿಗಳ ಗಮನಕ್ಕೆ ತರಲಾದರೂ ಪ್ರಯೋಜನವಾಗಿಲ್ಲ. ನಮ್ಮ ಹಣದಲ್ಲೆ  ಊಟ ಮಾಡುತ್ತಿದ್ದೇವೆ ಎಂಬುದು ವಿದ್ಯಾರ್ಥಿಗಳ ದೂರಾಗಿದೆ


ಸಿಟಿ ಬಸ್ ಸಂಪರ್ಕವೂ ಸಹ ಸರಿಯಾದ ವ್ಯವಸ್ಥೆ ಇಲ್ಲ. ಎರಡು ಬಸ್ ಇಲ್ಲಿಗೆ ಬರುತ್ತೆ ಬಸ್ ಗಳಲ್ಲಿ ನಾಲ್ಕು ಹಾಸ್ಟೆಲ್ ಗಳು ಐನೂರು ಜನ ವಿದ್ಯಾರ್ಥಿಗಳು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾರ್ಡನ್ ಸರಿಯಾಗಿ ಸಮಸ್ಯೆ ಬಗೆಹರಿಸುತ್ತಿಲ್ಲ. ಎಂಬುದು ದೂರಾಗಿದೆ. 


ಸ್ಥಳಕ್ಕೆ ಬಂದ ವಾರ್ಡನ್ ನನ್ನ ವಿದ್ಯಾರ್ಥಿಗಳು ಮುತ್ತಿಗೆಹಾಕಿದ್ದಾರೆ. ವಾರ್ಡ್ ನ್ ಸಹ  ಅಮಾನತ್ತುಗೊಂಡರೆ ಅಬ್ಬಬ್ಬ ಎಂದರೆ  6 ತಿಂಗಳು ಮನೆಯಲ್ಲಿರುತ್ತೇನೆ. ಮತ್ತೆ ಡ್ಯೂಟಿಗೆ ಜಾಯಿನ್ ಹಾಕ್ತೀನಿ ಎಂದು ಹೇಳಿರುವುದು ಪ್ರತಿಭಟನೆಯಲ್ಲಿ ಕುತೂಹಲ ಮೂಡಿಸಿದೆ. 


ಸ್ಥಳಕ್ಕೆ 112 ಧಾವಿಸಿದೆ. ನಾಲ್ಕೂ ಹಾಸ್ಟೆಲ್ ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡು ಎರಡು ಗಂಟೆ ಕಳೆದರೂ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. 

ಇದನ್ನೂ ಓದಿ-https://www.suddilive.in/2024/07/blog-post_914.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ