ಡ್ರೈನೇಜ್ ನೀರಿನಿಂದ ದೇವಸ್ಥಾನ ಜಲಾವೃತ-ಇಮಾಮ್ ಬಾಡಾದಲ್ಲಿ ಈಗ ರಾಜಾಕಾಲುವೆ ನೀರು ಹಿಂದಕ್ಕೆ ಹೊಡೆಯುತ್ತಿರುವ ಭೀತಿ

 

ಡ್ರೈನೇಜ್ ನೀರಿನಿಂದ ಕರಿರಾಯ ಕೆಂಚರಾಯ ದೇವಸ್ಥಾನದ ದೇವರು ಜಲಾವೃತ


ಸುದ್ದಿಲೈವ್/ಶಿವಮೊಗ್ಗ


ನದಿಯ ಅಪಾಯಮಟ್ಟದಲ್ಲಿ ಹರಿಯುತ್ತಿರುವುದರಿಂದ ರಾಜಕಾಲುವೆ ನೀರಿನಿಂದ ಡ್ರೈನೇಜ್ ನೀರು ವಾಪಾಸ್ ಹೊಡೆಯುತ್ತಿದೆ. ಪರಿಣಾಮ ಇಮಾಮ್ ಬಾಡಾ ನಿವಾಸಿಗಳು ಪರದಾಡುವಂತಾಗಿದೆ.


ಇಮಾಮ್ ಬಾಡಾ ರಸ್ತೆಯ ಮಗ್ಗಲಿಗೆ ಇರುವ ಕರಿರಾಯ ಕೆಂಚರಾಯ  ದೇವಸ್ಥಾನದ ಗರ್ಭಗುಡಿಯು ಒಳಗೆ  ಡ್ರೈನೇಜ್ ನೀರು ಹರಿಯುತ್ತಿದೆ. ದೇವರಿಗೆ ಡ್ರೈನೇಜ್ ನೀರು ಸುತ್ತು ಆವರಿಸಿಕೊಂಡಿದೆ. 



ಇದರ ಹಿಂಭಾಗದಲ್ಲಿರುವ ತಿರುಮಲ ಪ್ಲೇವುಡ್ ಸ್ಟೋರ್ ಡ್ರೈನೇಜ್ ನೀರಿನಿಂದ ಜಲಾವೃತಗೊಂಡಿದೆ. ನೀರು ದರ್ವಾಸನೆ ಹೊಡೆಯುತ್ತಿದೆ. ಈ ಕುರಿತು ಮಾತನಾಡಿರುವ ಮಾಲೀಕ ವಿಠಲ ಪ್ರತಿ ಮಳೆಗಾಲದಲ್ಲಿ ನದಿ ಅಪಾಯ ಮಟ್ಟದಲ್ಲಿ ಹರಿದರೆ ಡ್ರೈನೇಜ್ ನೀರು ವಾಪಾಸ್ ಹೊಡೆಯುತ್ತದೆ. 



ನಾಲ್ಕೈದು ದಿನದ ಹಿಂದೆ ನೀರು ಬಂದಿತ್ತು. ಆಗಲೂ ಪ್ರೇವುಡ್ ಕರ್ ಮೋಟಾರ್ ಗಳು ಸುಟ್ಟು ವೈಂಡಿಂಗ್ ಮಾಡಿಸಲಾಗಿತ್ತು. ಈಗ ಮತ್ತೆ ಈ ಪರಿಸ್ಥಿತಿ ನಿರ್ಮಾಣವಾಗಿದೆ ಒಂದು ಲಕ್ಷ ರೂ. ಪ್ಲೇವುಡ್ ಮತ್ತು ಮೋಟಾರು ಹಾಳಾಗಿದೆ.‌


ಸಧ್ಯಕ್ಕೆ ನದಿಯ ಒಳಹರಿವು ಇಳಿಮುಖವಾಗಿದೆ. ಸ್ಮಾರ್ಟ್ ಸಿಟಿಯ ಕಾಮಗಾರಿಯಿಂದ ರಾಜಕಾಲುವೆಯ ಬಳಿ ಇರುವ ಕುಡಿಯುವ ನೀರಿನ ಪೈಪ್ ಲೈನು ಸಹ ಜಲಾವೃತಗೊಂಡಿದೆ. ಸಧ್ಯಕ್ಕೆ ಪಾಲಿಮೆ ಬ್ಲೀಚಿಂಗ್ ಪೌಡರ್ ಹಾಕಿ ಹೋಗಿದ್ದಾರೆ.


ಈ ಕುರಿತು ಪಾಲಿಕೆ ಮಾಜಿ ಕಾರ್ಪರೇಟರ್ ಜಿಲಾನ್ ಸುದ್ದಿಲೈವ್ ಗೆ  ಮಾತನಾಡಿ ಇಮಾಮ್ ಬಾಡಾ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಮನೆ ಬಿದ್ದವರಿಗೆ ಈ ಹಿಂದೆ ಬಿಜೆಪಿ ಸರ್ಕಾರ ನೀಡುತ್ತಿದ್ದ ಐದು ಲಕ್ಷ ರೂ ಪರಿಹಾರ ಮತ್ತು ಭಾಗಶಃ ಮನೆಗಳಿಗೆ 1.20 ಸಾವಿರ ಕೊಡಬೇಕು. ಡ್ರಯನೇಜ್ ನೀರು ಸರಿಪಡಿಸಬೇಕೆಂದಿದ್ದಾರೆ.


ಇದನ್ನೂ ಓದಿ-https://www.suddilive.in/2024/07/blog-post_549.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು