ಬಾಳೆಬರೆಯಲ್ಲಿ ಗುಡ್ಡ ಕುಸಿತ


ಸುದ್ದಿಲೈವ್/ಹುಲಿಕಲ್

ಹೊಸನಗರ: ತಾಲೂಕಿನ ಬಾಳೆಬರೆ (ಹುಲಿಕಲ್ ) ಘಾಟಿನಲ್ಲಿ ಗುಡ್ಡ ಕುಸಿದು 10 ದಿನ ಕಳೆದರೂ ಯಾರು ಕೇಳೋರಿಲ್ಲ ಎಂಬ ಪರಿಸ್ಥಿತಿ ಉದ್ಭವವಾಗಿದೆ. ಈಗಾಗಲೇ ಗುಡ್ಡ ಕುಸಿದು ಅರ್ಧ ರಸ್ತೆಯನ್ನು ಆಕ್ರಮಿಸಿಕೊಂಡಿದೆ.

ಘಾಟ್ ರಸ್ತೆಯಲ್ಲಿ ವಾಹನ ಸಂಚಾರವೇ ಕಷ್ಟ. ಈ ನಡುವೆ ಗುಡ್ಡ ಕುಸಿದ ಜಾಗದಲ್ಲಿ ಎದುರುಗಡೆಯಿಂದ ವಾಹನ ಬಂದರೆ ಸೈಡ್ ನೀಡೋದು ಕೂಡ ಕಷ್ಟವಾಗುತ್ತಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ನಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಬಾಳೆಬರೆ ಘಾಟ್ ರಸ್ತೆ ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿ ಇದ್ದು ಹೆದ್ದಾರಿ ಅಧಿಕಾರಿಗಳು ಇನ್ನಾದರೂ ಗಮನಹರಿಸಿ ಗುಡ್ಡದ ಮಣ್ಣು ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ-https://suddilive.in/archives/19466

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket