ಬುಧವಾರ, ಜುಲೈ 24, 2024

74 ದಿನಗಳಿಂದ ಹೋರಾಟ ನಡೆಸುತ್ತಿದ್ದ ಡಿಎಸ್ ಎಸ್ ಅಂಬೇಡ್ಕರ್ ವಾದ ಸಂಘಟನೆಯ ಪ್ರತಿಭಟನೆಗೆ ಅಡ್ಡಿ

 

ಚಂದನ ಕೆರೆಯ ಸರ್ವೆ ನಂಬರ್ 12 ರಲ್ಲಿ ದಲಿತರ ಹೋರಾಟ

ಸುದ್ದಿಲೈವ್/ಭದ್ರಾವತಿ


ಭದ್ರಾವತಿಯ ಚಂದನ ಕೆರೆಯ  ಸರ್ವೆ ನಂಬರ್ 12 ರಲ್ಲಿರುವ ಜಮೀನನನ್ನ ದಲಿತರಿಗೆ ಅಳತೆ ಮಾಡಿಕೊಟ್ಟು ಹಂಚಬೇಕೆಂದು ಆಗ್ರಹಿಸಿ ಕಳೆದ 74 ದಿನಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಗೋವುಗಳನ್ನ ಬಿಟ್ಟು ಅಡ್ಡಿಪಡಿಸುವ ಪ್ರಯತ್ನ ನಡೆದಿದೆ. 


ಭದ್ರಾವತಿಯ ಚಂದನಕೆರೆ ಸರ್ವೆ‌ನಂಬರ್ 12 ರಲ್ಲಿ 1961 ರಿಂದ ದಲಿತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. 1961 ರಿಂದ 1984 ರವರೆಗೆ ಸಾಗುವಳಿ ಮಾಡಿಕೊಂಡು ಬಂದ ದಲಿತ ರೈತರನ್ನ ಒಕ್ಕಲೆಬ್ಬಿಸಿ ಎಂಪಿಎಂ ನೆಡುತೋಪು ನಿರ್ಮಿಸಲು ಅವಕಾಶ ನೀಡಲಾಗಿತ್ತು. 


1984 ರಿಂದ ದಲಿತ ರೈತರು ಸರ್ಕಾರಕ್ಕೆ ಪತ್ರ ಬರೆಯುವ ಮುಲಕ ಜಮೀನು ಬಿಟ್ಟಕೊಡಲು ಆಗ್ರಹಿಸುತ್ತಾ ಬರಲಾಗಿದೆ. ಇದರ ಅಂಗವಾಗಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಜಿಲ್ಲಾ ಸಹ ಸಂಚಾಲಕ ಹಾಲೇಶಪ್ಪನವರ ನೇತೃತ್ವದಲ್ಲಿ ಎಂಪಿಎಂ ಭೂಮಿಯನ್ನ ದಲಿತರಿಗೆ ಬಿಟ್ಟುಕೊಡುವಂತೆ ಆಗ್ರಹಿಸಿ ಕಳೆದ 74 ದಿನಗಳಿಂದ ಪ್ರತಿಭಟಿಸುತ್ತಾ ಬಂದಿದ್ದಾರೆ. 



ಇಂದು ಗೋಮಾಳ ಜಾಗವನ್ನ ಕಬಳಿಸಿಕೊಂಡು ಬಂದ ಕೆಲ ಪಟ್ಟಭದ್ರ ಹಿತಾಸಕ್ತರು ಪ್ರತಿಭಟನಾಕಾರರ ಮೇಲೆ ಗೋವುಗಳನ್ನ ಬಿಟ್ಟು ಪ್ರತಿಭಟನೆ ನಿಲ್ಲಿಸಲು ಯತ್ನಿಸಿದ್ದಾರೆ. ಪ್ರತಿಭಟನಾ ಜಾಗದಲ್ಲಿ ಮೆಕ್ಕೆ ಜೋಳವನ್ನ ನೆಟ್ಟು ಅಡ್ಡಿಪಡಿಸಲಾಗಿದೆ ಎಂದು ಡಿಎಸ್ ಎಸ್ ಅಂಬೇಡ್ಕರ್ ವಾದ ಆರೋಪಿಸಿದೆ. 

ಅಡ್ಡಿಪಡಿಸಲು ಬಂದವರೇ  ಪೊಲೀಸ್ ಠಾಣೆಗೆ ಹೋಗಿ ಪ್ರತಿಭಟನಾಕರಾರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ದಲಿತರ ಮೇಲೆ ದೌರ್ಜನ್ಯ ನಡೆಸಿರುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. 


ಇದನ್ನೂ ಓದಿ-https://www.suddilive.in/2024/07/blog-post_988.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ