ಮೃತನ ಮನೆಗೆ ಸಿಐಡಿ ಅಧಿಕಾರಿಗಳು ವಿಸಿಟ್

ಸುದ್ದಿಲೈವ್/ಶಿವಮೊಗ್ಗ

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಂಟೆಂಟ್ ಅವರ ಆತ್ಮಹತ್ಯೆಯ ಬೆನ್ನಲ್ಲೇ ಪ್ರಕರಣ ಸಿಐಡಿಗಳಿಗೆ ಹಸ್ತಾಂತರಿಸಲಾಗಿದ್ದು ಸಿಐಡಿ ಅಧಿಜಾರಿಗಳು ಮೃತರನೆ ಮತ್ತು ವಿನೋಬ ನಗರ ಪೊಕೀಸ್ ಠಾಣೆಗೆ ಭೇಟಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಮೃತರ ಕುಟುಂಬ ಪೆನ್ ಡ್ರೈವ್ ನ್ನ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿರುವುದು ತಿಳಿದು ಬಂದಿದೆ. ಪೆನ್ ಡ್ರೈವ್ ನ ಮೇಲೆ ಚಂದ್ರಶೇಖರ್ ಎಂದು ಬರೆದಿದ್ದು ಪೆನ್ ಡ್ರೈವ್ ಮತ್ತು ಡೆತ್ ನೋಟ್ ಬರೆದ ಪೆನ್ ನ್ನೂ ಸಹ ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.

ಐವರು ಅಧಿಕರಿಗಳು  ಬೆಂಗಳೂರಿನಿಂದ‌ ಆಗಮಿಸಿದ್ದು, ವಿನೋಬ ನಗರ ಪೊಲೀಸ್ ಠಾಣೆಗೂ ಭೇಟಿ ನೀಡಿದ್ದಾರೆ. ಸಿಐಡಿ ಡಿವೈಎಸ್ಪಿ ಮೊಹಮದ್ ರಫಿ ನೇತೃತ್ವದ ತಂಡ ಭೇಟಿ ನೀಡಿದೆ.

ಇದನ್ನೂ ಓದಿ-https://suddilive.in/archives/15662

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket