ಸುದ್ದಿಲೈವ್/ಶಿವಮೊಗ್ಗ
ಹೊಳೆಹೊನ್ನೂರಿನ ಬೆಳ್ಳಿಗೆರೆ ಗ್ರಾಮದಲ್ಲಿ ಕುರಿಗಳನ್ನ ಕದ್ದಿರುವ ಘಟನೆ ನಡೆದಿದೆ.
ಬೆಳ್ಳಿಗೆರೆ ಗ್ರಾಮದ ಸರ್ವೆ ನಂಬರ್ 06/3 ರಲ್ಲಿ ರಾಮಚಂದ್ರ ವೈ ಎಂಬುವರಿಗೆ ಸೇರಿದ್ದ ಎರಡು ಎಕರೆ ಅಡಿಕೆ ತೋಟವಿದ್ದು ಇಲ್ಲಿ ಸುಮಾರು 7 ಕುರಿಗಳನ್ನ ಸಾಕಿದ್ದರು.
ಶೆಡ್ ನಿರ್ಮಿಸಿ ಅವುಗಳನ್ನ ಸಾಕುತ್ತಿದ್ದ ರಾಮಚಂದ್ರಪ್ಪನವರು ಹಿಂದಿನ ದಿನ ತೋಟದಲ್ಲಿ ಕುರಿ ಮೇಯಲು ಬಿಟ್ಟು ಸಂಜೆ ಅವುಗಳನ್ನ ಶೆಡ್ ನಲ್ಲಿ ಹಾಕಿದ್ದರು.
ಮರುದಿನ ಬಂದು ನೋಡಿದಾಗ ಶೆಡ್ನಬೀಗ ಮುರಿದು 7 ಕುರಿಯಲ್ಲಿ ಮೂರು ಕುರಿಗಳಿರುವುದು ತಿಳಿದು ಬಂದಿದೆ.80 ಸಾವಿರ ರೂ. ಮೌಲ್ಯದ 4 ಕುರಿಗಳನ್ನ ಕದ್ದುಕೊಂಡು ಹೋಗಿರುವುದಾಗಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ರಾಮಚಂದ್ರನವರು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ-https://suddilive.in/archives/15771
Tags:
ಕ್ರೈಂ ನ್ಯೂಸ್