ಸ್ಥಳೀಯ ಸುದ್ದಿಗಳು

ಈಗಾಗಲೇ ಎಂಪಿ ಟಿಕೆಟ್ ಕೊಡಿಸಿದ್ದು ಸಾಕು ಎಂಎಲ್ ಸಿ ಸ್ಥಾನ ಬೇಡ

ಸುದ್ದಿಲೈವ್/ಶಿವಮೊಗ್ಗ

ಮಗ ಕಾಂತೇಶ್ ಗೆ ಟಿಕೇಟ್ ವಂಚನೆ ಕುರಿತು ಈಶ್ವರಪ್ಪನವರ ಮುನಿಸು ಅಚಲವಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಮತ್ತು ಮಗ ವಿಜೇಂದ್ರನ ವಿರುದ್ಧ ಆಕ್ರೋಶ ಮುಂದು ವರೆದಿದೆ.

ಈ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಮಾಜಿ ಡಿಸಿಎಂ ಈಶ್ವರಪ್ಪ, ಯಡಿಯೂರಪ್ಪನವರು ಮೊದಲು ಹಾವೇರಿ ಟಿಕೇಟ್ ಕೊಡುವುದಾಗಿ ಭರವಸೆ ನೀಡಿದ್ದಾರೆ. ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ 66 ಸ್ಥಾನ ಪಡೆಯುವುದರಲ್ಲಿ ಸಂತೃಪ್ತಿಗೊಂಡಿತ್ತು.

ಈಶ್ವರಪ್ಪನವರ ಪುತ್ರ ಕಾಂತೇಶ್ ಗೆ ಎಂಎಲ್ ಸಿ ಮಾಡುವುದಾಗಿ ಯಡಿಯೂರಪ್ಪನವರು ಭರವಸೆ ನೀಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ ಈಗಾಗಲೇ ಟಿಕೇಟ್ ನೀಡುವುದಾಗಿ ಬಿಎಸ್ ವೈ ಜೇಳಿದ್ದರು. ಟಿಕೇಟ್ ಕೊಡಿಸ್ದಾರೆ. ಮತ್ತೆ ಎಂಎಲ್ ಸಿ ಮಾಡ್ತಾರೆ ಎಂಬುದನ್ನ ಹೇಗೆ ನಂಬೋದು ಎಂದು ಮಾರ್ಮಿಕವಾಗಿ ನುಡಿದರು.

ವಿಜೇಂದ್ರ ಮತ್ತು ಯಡಿಯೂರಪ್ಪನವರ ಕೈಯಲ್ಲಿ ಬಿಜೆಪಿ ಪಕ್ಷವಿದೆ. ವಿಜೇಂದ್ರ ರಾಜ್ಯಾಧಗಯಕ್ಷನಾದ ಮೇಲೆ ರಚನೆಗೊಂಡ ಪದಾಧಿಕಾರಿಗಳ ನೇಮಕವನ್ನ ಯಾರ ಗಮನಕ್ಕೂ‌ತಾರದೆ‌ ರಚಿಸಲಾಗಿತ್ತು. ಮೊದಲನೇ ಕೋರ್ ಕಮಿಟಿಯ ಒಪ್ಪಿಗೆ ಪಡೆಯದೆ ರಚನೆ ಮಾಡಿದ್ದರು ಎಂದು ದೂರಿದರು.

ಹಾಗಾಗಿ ಅಪ್ಪ‌ ಮಗನ ಕಪಿಮುಷ್ಠಿಯಲ್ಲಿದೆ. ಅನೇಕರು ತೊಂದರೆಗೊಳ ಪಟ್ಟಿದ್ದಾರೆ. ಈ ಕುರಿತು ಚರ್ಚೆ ನಡೆಯಬೇಕಿದೆ. ಮಾ.18 ರಂದು ನಡೆಯುವ ಮೋದಿ ಕಾರ್ಯಕ್ರಮಕ್ಕೆ ಇಂದು ನಡೆದ ಸಭೆಯಲ್ಲಿ ನಿರ್ಧರಿಸುವುದಾಗಿ ತಿಳಿಸಿದರು.

ಇದನ್ನೂ ಓದಿ-https://suddilive.in/archives/10745

Related Articles

Leave a Reply

Your email address will not be published. Required fields are marked *

Back to top button